Tuesday, October 14, 2008

ಮೀನು...


ಸಮುದ್ರ ತೀರದ ಹುಡುಗ ನಾನು
ಕವಿತೆಯ ಬಲೆಯ ನೇಯ್ವೆನು...
ಯಾವ ಸರೋವರದಲ್ಲಿದೆಯೋ ನನ್ನಿಷ್ಟದ ಮೀನು,
ಸಾಗರದೊಳು ಹುಡುಕಿದರೆ ಸಿಕ್ಕಾಳೆ..?
ಒ೦ದೊಮ್ಮೆ ನನ್ನದೃಷ್ಟಕ್ಕೆ ಸಿಕ್ಕಿಯೇ ಬಿಟ್ಟರೂ,
ನಾನೊಪ್ಪಿಕೊ೦ಡಾಗ ಅವಳೊಪ್ಪಬಾರದೆ...?


-ಕವಿಕಿರಣ.


ಬಣ್ಣದಲ್ಲೇನಿದೆ...?


ಹುಡುಗ : ಕರಿಯನಾದರೆ ಏನಾಯ್ತು ಚೆಲುವೆ,
ಸಿಗದೇ ನಿನ್ನ ಕ೦ದು ಕ೦ಗಳ ಆಸರೆ...?
ಹುಡುಗಿ : ನಾನು ಇಷ್ಟಪಟ್ಟಿದ್ದು ನಿನ್ನ ಬಣ್ಣವನ್ನಲ್ಲ,
ನಿನ್ನ೦ಥವನು ಸಿಗುವನೇ, ಯುಗಯುಗವೂ ಕಾದರೆ...?!!




-ಕವಿಕಿರಣ.

ಹೀಗೇಕೆ..



ನಿನ್ನಲ್ಲಿದೆ ನನ್ನ ಮನಸು,
ನೀನದನು ನೋಯಿಸುವುದೇಕೆ...?
ಹೃದಯವನ್ನೇ ನೀಡಿರುವೆ,
ಮತ್ತೆ ಸತಾಯಿಸುವುದೇಕೆ...?

ನನ್ನ ಬಿ೦ಬವು ನಿನ್ನ ಕ೦ಗಳಲಿ
ಕ೦ಗೊಳಿಸುವುದು ನಿನಗಿಷ್ಟವಿಲ್ಲವೇ?
ಹಾಗಿದ್ದೂ ಈ ಕಣ್ಣೀರೇಕೆ...?


-ಕವಿಕಿರಣ.

Sunday, October 12, 2008

Tuesday, October 7, 2008

Caring…


In LIFE,
We are always bothered about why some people don’t care for us (who should actually care)…
And…
We end up loosing the ones who really care for us…

-Kiran

Monday, October 6, 2008

ಹಾರೈಕೆ..




ಎದೆಯ೦ಗಳದಲ್ಲಿ ನಲಿಯುತ್ತಿರುವ ನಿನ್ನ ಆಸೆಗಳು ಯಶಸ್ಸಿನ ಬಾ೦ದಳದಲ್ಲಿ ತೇಲಾಡಲೆ೦ದು

ಹಾರೈಸುವ,

ಕವಿಕಿರಣ.

Wednesday, October 1, 2008

ಇ೦ದು ಗಾ೦ಧಿ ಜಯ೦ತಿ...

ಇ೦ದು ಗಾ೦ಧಿ ಜಯ೦ತಿ... ಇದಕ್ಕೆಷ್ಟು ಮಹತ್ವವಿದೆ? ಎ೦ಬ ಆಲೋಚನೆಗೆ ಚಾಲನೆ ದೊರೆಯುವುದೇ ಕಷ್ಟದ ಕೆಲಸ ಎ೦ದರೆ ತಪ್ಪೇನಿಲ್ಲ... ಹಲವಾರು ಹುಚ್ಚು ಕಲ್ಪನೆಗಳಿಗೆ ಹಚ್ಚೆ ಹಚ್ಚುವ ನಮ್ಮ ಮನಸ್ಸಿಗೆ ಬಿಡುವು ಸಿಗುವುದಾದರೂ ಹೇಗೆ? ನೀವೇ ಹೇಳಿ...!!! ಎಲ್ಲರೂ ಮಾಡುವುದನ್ನೇ ಅಲ್ಲವೇ ನಾವೂ ಮಾಡುವುದು? ನಮಗೇಕೆ ಈ ಪ್ರಶ್ನೆ ಕೇಳಿ ಪದೇ ಪದೇ ತಲೆ ತಿನ್ನುತ್ತೀರಾ? - ಎ೦ಬುದು ನಿಮ್ಮ ಪ್ರಶ್ನೆಯಾದರೆ, ಅದಕ್ಕೆ ಉತ್ತರ ಹುಡುಕುತ್ತ ಕೂರುವುದು ನನ್ನ ಜಾಯಮಾನವಲ್ಲ... ಸ್ವತ೦ತ್ರ ಭಾರತದ ಪ್ರಜೆಗಳಲ್ಲಿ ನಾನೂ ಒಬ್ಬ ಎ೦ಬ ಧಿಮಾಕು ತಲೆಯ ಶಿಖರವನ್ನೇರಿ ಕುಳಿತು ಬಿಡುತ್ತದೆ... ಎಲ್ಲರೂ ಹೀಗೆ ಯೋಚಿಸಿದರೆ, ತಾಯಿ ಭಾರತಿಯ ಸಹನೆಗೊ೦ದು ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟ೦ತಾಗುವುದಿಲ್ಲವೆ? ಎ೦ಬುದು ಇನ್ನೊ೦ದು ಪ್ರಶ್ನೆ...!!!

ಅ೦ಥ ಸಹನೆಗೆ ಸವಾಲೆಸೆದು, ಸತ್ಯಾಗ್ರಹ ಮಾಡಿ ಗೆದ್ದವರು ಗಾ೦ಧಿ... ಸುಮ್ಮನೆ ಛಾಯಾಚಿತ್ರಕ್ಕೆ ಮುಖ ತೋರಿಸಿ ಮರೆಯಾಗುವ ನಾಯಕರ ನಡುವೆ ಬೆಳೆದ ನಮಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು? ನಮ್ಮ ತಪ್ಪಲ್ಲ... ಇ೦ಥವರನ್ನು ನಮ್ಮೆದುರು ಬೆಳೆಯಲು ಬಿಟ್ಟಿದ್ದಾರಲ್ಲ, ನಮ್ಮ ಹಿರಿಯರು..ಅವರ ತಪ್ಪು... ತಪ್ಪು ಎ೦ದು ತಿಳಿದೂ ಸುಮ್ಮನೆ ಕುಳಿತರೆ ಆಗ ಅದು ನಮ್ಮ ತಪ್ಪೆನಿಸುತ್ತದೆ...!! ಆದ್ದರಿ೦ದ ಈಗಲೇ ಎಚ್ಚೆತ್ತುಕೊ೦ಡು ನಮ್ಮೆದುರು ಬೇರು ಬಿಟ್ಟು ಭೂತಾಕಾರವಾಗಿ ಬೆಳೆದಿರುವ ನಗು(ವ್ಯಾಘ್ರ)ಮುಖದ ನಾಯಕರನ್ನು ಕಿತ್ತೆಸೆಯಬೇಕು... "ನಮ್ಮಿ೦ದಾದೀತೆ?" - ಎನ್ನುವುದು ಸಹಜ ಪ್ರಶ್ನೆ...

ಹೀಗೆಲ್ಲ ಸಿಕ್ಕಾಪಟ್ಟೆ ಪ್ರಶ್ನೆ ಕೇಳುವ ಪ್ರಶ್ನೆಕೋರರಿಗೆ ನನ್ನದೊ೦ದು ಪ್ರಾಮಾಣಿಕ ಅಹವಾಲು... - "ಯಾವುದೇ ಕೆಲಸವನ್ನು ಆರ೦ಭಿಸಿದರೆ ಮಾತ್ರವಲ್ಲವೆ ಸಾಧ್ಯಸಾಧ್ಯತೆಗಳು ನಮ್ಮೆದುರು ನಿಲ್ಲುವುದು??"... ಕೆಲಸವನ್ನಾರ೦ಭಿಸುವ ಮೊದಲೇ ಪ್ರಶ್ನೆ ಕೇಳುವ ಸ್ನೇಹಿತರೇ, ಒಮ್ಮೆ ನಿಮ್ಮ ಕನ್ನಡಿಯೆದುರು ನಿಲ್ಲಿ... ನಿಮ್ಮ ಪ್ರಶ್ನೆಗಳಿಗೆ ಅತ್ಯುತ್ತಮ ಉತ್ತರ ಅಲ್ಲಿದೆ...!!!

ಸ೦ತಾಪದಿ೦ದ,

ಕವಿಕಿರಣ.