ಅ೦ಥ ಸಹನೆಗೆ ಸವಾಲೆಸೆದು, ಸತ್ಯಾಗ್ರಹ ಮಾಡಿ ಗೆದ್ದವರು ಗಾ೦ಧಿ... ಸುಮ್ಮನೆ ಛಾಯಾಚಿತ್ರಕ್ಕೆ ಮುಖ ತೋರಿಸಿ ಮರೆಯಾಗುವ ನಾಯಕರ ನಡುವೆ ಬೆಳೆದ ನಮಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು? ನಮ್ಮ ತಪ್ಪಲ್ಲ... ಇ೦ಥವರನ್ನು ನಮ್ಮೆದುರು ಬೆಳೆಯಲು ಬಿಟ್ಟಿದ್ದಾರಲ್ಲ, ನಮ್ಮ ಹಿರಿಯರು..ಅವರ ತಪ್ಪು... ತಪ್ಪು ಎ೦ದು ತಿಳಿದೂ ಸುಮ್ಮನೆ ಕುಳಿತರೆ ಆಗ ಅದು ನಮ್ಮ ತಪ್ಪೆನಿಸುತ್ತದೆ...!! ಆದ್ದರಿ೦ದ ಈಗಲೇ ಎಚ್ಚೆತ್ತುಕೊ೦ಡು ನಮ್ಮೆದುರು ಬೇರು ಬಿಟ್ಟು ಭೂತಾಕಾರವಾಗಿ ಬೆಳೆದಿರುವ ನಗು(ವ್ಯಾಘ್ರ)ಮುಖದ ನಾಯಕರನ್ನು ಕಿತ್ತೆಸೆಯಬೇಕು... "ನಮ್ಮಿ೦ದಾದೀತೆ?" - ಎನ್ನುವುದು ಸಹಜ ಪ್ರಶ್ನೆ...
ಹೀಗೆಲ್ಲ ಸಿಕ್ಕಾಪಟ್ಟೆ ಪ್ರಶ್ನೆ ಕೇಳುವ ಪ್ರಶ್ನೆಕೋರರಿಗೆ ನನ್ನದೊ೦ದು ಪ್ರಾಮಾಣಿಕ ಅಹವಾಲು... - "ಯಾವುದೇ ಕೆಲಸವನ್ನು ಆರ೦ಭಿಸಿದರೆ ಮಾತ್ರವಲ್ಲವೆ ಸಾಧ್ಯಸಾಧ್ಯತೆಗಳು ನಮ್ಮೆದುರು ನಿಲ್ಲುವುದು??"... ಕೆಲಸವನ್ನಾರ೦ಭಿಸುವ ಮೊದಲೇ ಪ್ರಶ್ನೆ ಕೇಳುವ ಸ್ನೇಹಿತರೇ, ಒಮ್ಮೆ ನಿಮ್ಮ ಕನ್ನಡಿಯೆದುರು ನಿಲ್ಲಿ... ನಿಮ್ಮ ಪ್ರಶ್ನೆಗಳಿಗೆ ಅತ್ಯುತ್ತಮ ಉತ್ತರ ಅಲ್ಲಿದೆ...!!!
ಸ೦ತಾಪದಿ೦ದ,
ಕವಿಕಿರಣ.